ಅಂಬೇಡ್ಕರ್ ಯುವ ಸೇನೆ ವತಿಯಿಂದ ಕಾರ್ಮಿಕ ಇಲಾಖೆಯ ಸುರಕ್ಷಾಕಿಟ್ ವಿತರಣೆ

0
6

ಕಲಬುರಗಿ: ಅಂಬೇಡ್ಕರ್ ಯುವ ಸೇನೆ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ತಳಕೇರಿ, ಜಿಲ್ಲಾ ಉಪಾಧ್ಯಕ್ಷ ಲೋಹಿತ ಹೊಸಮನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ಶ್ರೀಚಂದ ಅವರ ನೇತೃತ್ವದಲ್ಲಿ ಹರಸೂರ ಗ್ರಾಮದ ಅಸಂಘಟಿತ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯ ಸುರಕ್ಷಾ ಕಿಟ್ ವಿತರಿಸಲಾಯಿತು.

ಸದರಿ ಸುರಕ್ಷಾ ಕಿಟ್ ನಲ್ಲಿ ಸ್ಯಾನಿಟೈಜರ್ , ಹ್ಯಾಂಡ್ ವಾಶ್, ಸ್ನಾನ ಮಾಡುವ ಸೋಪು, ಮಾಸ್ಕ್,ಬಟ್ಟೆ ತೊಳೆಯುವ ಸಾಬೂನು ಒಳಗೊಂಡಿವೆ. ಇದೆ ವೇಳೆ ಕೋರೊನಾ ಮೂರನೆ ಅಲೆಯ ಬಗ್ಗೆ ಕಾರ್ಮಿಕರಿಗೆ ಮುಂಜಾಗ್ರತೆಯ ಕ್ರಮದ ಬಗ್ಗೆ ಜಾಗೃತಿ ಮೂಡಿಸಲಾಯಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಮಹೇಶ ಕಲ್ಲೂರ, ಚನ್ನಬಸಪ್ಪ ಜೋಗಾ, ಚನ್ನಶೆಟ್ಟಿ ಪಾಟೀಲ್, ಕಲ್ಲಪ್ಪ ಮಾಂಗ್, ತಮ್ಮಣ್ಣ ಪೂಜಾರಿ, ಅಂಬಣ್ಣ ಭಜಂತ್ರಿ, ಲಾಲಪ್ಪ ಕಣ್ಣೂರ, ರಾಣೇಶ ತಾವರಗೇರಾ, ಮಂಜುಳಾ ಎಸ್ ಜಮಾದಾರ್ ಶರಮ್ಮ ಪೂಜಾರಿ, ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here