ಕಲಬುರಗಿ : ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದ ಡಾ. ಮಲ್ಲಿಕಾರ್ಜುನ್ ಖರ್ಗೆ ಅವರು ಆಯ್ಕೆ ಆದ ಹಿನ್ನೆಲೆ ಯುವ ಕಾಂಗ್ರೆಸ್ ಕಾಂಗ್ರೆಸ್ ಸಮಿತಿ ಹಾಗೂ ದಕ್ಷಿಣ ಯುವ ಕಾಂಗ್ರೆಸ್ ಅಧ್ಯಕ್ಷ ಪರಶುರಾಮ ಕೆ.ನಾಟಿಕಾರ ಅವರ ನೇತೃತ್ವದಲ್ಲಿ ನಗರದ ಸರ್ದಾರ ವಲ್ಲಾ ಭಾಯಿ ವೃತ್ತದಲ್ಲಿ ಅವರ ಭಾವಚಿತ್ರಕ್ಕೆ ಹಾಲು ಮತ್ತು ತುಪ್ಪದ ಅಭಿಷೇಕ ಮಾಡಿ ಸಂಭ್ರಮಾಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಅಸ್ಲಾಂ, ಅಶ್ವಿನ ಸಂಕಾ, ವಿಘ್ನೇಶ್ ಟೈಗರ್, ಪ್ರಕಾಶ ರ್ಕೋನಳ್ಳಿ, ಶಾಂತು ರೆಡ್ಡಿ, ಆನಂದ, ಮಹೇಶ, ಲಕ್ಕಪ್ಪ, ಕಾಂತು, ಕಿರಣ, ಮಲ್ಲು, ಸೂರ್ಯಕಾಂತ, ಗಿರಿಶ, ಅಭಿಷೇಕ, ವಿಜಯ ಪುರಾಣಿಕ್, ರಾಮು ಪೂಜಾರಿ, ಸಿದ್ಧಾರ್ಥ್, ಸಚಿನ್ ಸೇರಿದಂತೆ ಕಾರ್ಯಕರ್ತರು ಇದ್ದರು.