ಕೃಷಿ ಕೂಲಿ ಕಾರ್ಮಿಕರಿಗೆ ಕಾಯಕ ಬಂಧು ಕಾರ್ಡ್ ನೀಡಲು ಮನವಿ

0
9

ಸುರಪುರ: ಕೃಷಿ ಕೂಲಿಕಾರರ ಮೆಟ್‍ಗಳಿಗೆ ಕಾಯಕ ಬಂಧು ಕಾರ್ಡ್ ನೀಡಬೇಕು ಮತ್ತು ನೊಂದಣಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿ ಕಾರ್ಮಿಕರ ಸಂಘ ದಿಂದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

ತಾಲೂಕಿನ ಕಾರ್ಮಿಕರಿಗೆ ನೂರು ದಿನಗಳ ಕೆಲಸ ನೀಡಬೇಕು,ಪ್ರತಿ 15 ದಿನಕ್ಕೊಮ್ಮೆ ಎನ್.ಎಮ್.ಆರ್ ಕೊಡಬೇಕು ಮತ್ತು ಆಲ್ದಾಳ ಗ್ರಾಮ ಪಂಚಾಯಿತಿಯ ಆಲ್ದಾಳ,ಬೋನಾಳ,ನಾಗರಾಳ,ಕಚಕನೂರ ಗ್ರಾಮ ಪಂಚಾಯತಿ,ದೇವಪುರ ಗ್ರಾಮ ಪಂಚಾಯತಿಯ ದೇವಪುರ,ಮುಷ್ಠಳ್ಳಿ,ಶೆಳ್ಳಗಿ,ಪೇಠ ಅಮ್ಮಾಪುರ ಗ್ರಾಮ ಪಂಚಾಯತಿಯ ಪೇಠ ಅಮ್ಮಾಪುರ,ಜಾಲಿಬೆಂಚಿ,ಮಂಗಳೂರ,ವಾಗಣಗೇರ ಗ್ರಾಮ ಪಂಚಾಯತಿಯ ವಾಗಣಗೇರ,ಎಸ್.ಹೆಚ್.ಖಾನಾಪುರ ಗ್ರಾಮ ಪಂಚಾಯತಿ,ಕವಡಿಮಟ್ಟಿ,ಯಕ್ತಾಪುರ ಗ್ರಾಮ ಪಂಚಾಯತಿಯ ಆಲ್ದಾಳ,ತಳ್ಳಳ್ಳಿ ಈ ಎಲ್ಲಾ ಗ್ರಾಮಗಳಲ್ಲಿ ನಮ್ಮ ಸಂಘಟನೆ ಇದ್ದು ಮೆಟ್‍ಗಳ ಕಾಯಕ ಬಂಧು ನೊಂದಣಿ ಮತ್ತು ಕಾರ್ಡ್ ಮಾಡಿಕೊಡಬೇಕು ಒಂದು ವೇಳೆ ನಮ್ಮ ಮನವಿಗೆ ಸ್ಪಂಧಿಸದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿ ತಾಲೂಕು ಪಂಚಾಯತಿ ವ್ಯವಸ್ಥಾಪಕರ ಮೂಲಕ ಮನವಿ ಸಲ್ಲಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಪ್ರಕಾಶ ಆಲ್ಹಾಳ,ಕಾರ್ಮಿಕರಾದ ಹುಸನಪ್ಪ,ಬಸವರಾಜ,ಆದಮ್ಮ,ಸಿದ್ದಮ್ಮ,ಈಶಮ್ಮ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here