ಕುಡಿಯುವ ನೀರಿಗಾಗಿ ಅಧಿಸೂಚಿತ ಕ್ಷೇತ್ರ ಸಮಿತಿಯಿಂದ ಕೊಳವೆ ವ್ಯವಸ್ಥೆ

0
11

ಶಹಾಬಾದ:ಕೊಳವೆ ಬಾವಿಯನ್ನು ತೋಡಿಸುವ ಮೂಲಕ ಶಾಸಕ ಬಸವರಾಜ ಮತ್ತಿಮಡು ಅವರು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಬಿಜೆಪಿ ಮಹಿಳಾ ಮೋರ್ಚಾ ಕಾರ್ಯದರ್ಶಿ ಸಕುಲತಾ.ಡಿ ಹೇಳಿದರು.

ಅವರು ನಗರದ ಜೆಪಿ ಕಾಲೋನಿಯಲ್ಲಿ ಅಧಿಸೂಚಿತ ಕ್ಷೇತ್ರ ಸಮಿತಿಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಈಗಾಗಲೇ ಜೆಪಿ ಕಾಲೋನಿಲ್ಲಿ ಕುಡಿಯುವ ನೀರಿನ ತೊಂದರೆಯಿದೆ.ಈ ಬಗ್ಗೆ ಶಾಸಕ ಬಸವರಾಜ ಮತ್ತಿಮಡು ಅವರ ಗಮನಕ್ಕೆ ತಂದಾಗ, ಶಾಸಕರು ಖುದ್ದಾಗಿ ಕಾಲೋನಿಗೆ ಬೇಟಿ ನೀಡಿ ಅಧಿಸೂಚಿತ ಕ್ಷೇತ್ರ ಸಮಿತಿ ಮುಖ್ಯಾಧಿಕಾರಿಗೆ ಕೊಳವೆ ಬಾವಿ ತೋಡಿಸಿ, ಸಾರ್ವಜನಿಕರಿಗೆ ನೀರಿನ ಅನುಕೂಲ ಮಾಡಿಕೊಡಲು ಹೇಳಿದರು.

ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಸೂಚಿತ ಕ್ಷೇತ್ರ ಸಮಿತಿ ಮುಖ್ಯಾಧಿಕಾರಿ ಪೀರಶೆಟ್ಟಿ ಎರಡು ಕೊಳವೆ ಹಾಕಿದ್ದು, ಎರಡರಲ್ಲಿ ನೀರು ಬಂದಿದೆ.ಇದರಿಂದ ಇಲ್ಲಿನ ಸಾರ್ವಜನಿಕರಿಗೆ ಅನುಕೂಲವಾಗಲಿದೆ.ಶಾಸಕರು ತೋರಿದ ಸ್ಪಂದನೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಇ ಶಾಂತರೆಡ್ಡಿ ದಂಡಗುಲಕರ್,ಶ್ರೀದೇವಿ, ಮೋನಿಕಾ,ಶಿಲ್ಪಾ.ಜಿ, ಸರಸ್ವತಿ.ಎನ್, ಮಾಲಾ.ಬಿ, ನಾಗುಬಾಯಿ,ಶೋಭಾ, ಕಾವೇರಿ, ಮಲ್ಲಮ್ಮಾ,ರಾಜೇಶ.ಎಸ್, ಲಕ್ಷ್ಮಿಬಾಯಿ, ಉದಯ, ರಫಿಕ್, ಯಲ್ಲಪ್ಪ, ಸಂತೋಷ ಹುಲಿ, ಲಕ್ಷ್ಮಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here