ಕಲಬುರಗಿ; ಜಿಲ್ಲೆಯಲ್ಲಿ ಈಗಾಗಲೇ ತೊಗರಿ ಕಟಾವು ಆರಂಭವಾಗಿದ್ದು, ಇದು ಮಾರುಕಟ್ಟೆಗೆ ಬರುವುದರೊಳಗೆ ಸಣ್ಣ ರೈತರಿಗೆ ಅನುಕೂಲವಾಗುವಂತೆ ಖರೀದಿ ಪ್ರಕ್ರಿಯೆ ಆರಂಭಿಸುವಂತೆ ಆಗ್ರಹಿಸಿ ಸಂಯುಕ್ತ ಹೋರಾಟ-ಕರ್ನಾಟಕ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಸಂಯುಕ್ತ ಹೋರಾಟ-ಕರ್ನಾಟಕ ಕಲಬುರಗಿಯ ಸಂಚಾಲಕರಾದ ಮೌಲಾ ಮುಲ್ಲಾ, ಮಹೇಶ ಎಸ್.ಬಿ, ನಾಗೇಂದ್ರಪ್ಪ ತಂಬೆ, ಭೀಮಾಶಂಕರ ಮಾಡ್ಯಾಳ್, ಮಲ್ಲಣ್ಣಗೌಡ, ಎ.ಬಿ.ಹೊಸಮನಿ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.